ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Friday 11 July, 2008

ಸ್ನೇಹಿತರಿಗೆಲ್ಲ ಆಮಂತ್ರಣ

ಆತ್ಮೀಯ ಸ್ನೇಹಿತರೇ,
ಜುಲೈ ತಿಂಗಳ ಕೊನೆಯ ಭಾನುವಾರ, 27ನೇ ತಾರೀಕು, ತ್ರಿವೇಣಿ (ತುಳಸಿಯಮ್ಮ) ಮತ್ತು ನನ್ನ ಪುಸ್ತಕಗಳು ಬೆಂಗಳೂರಲ್ಲಿ ಬೆಳಕು ಕಾಣಲಿವೆ. ತ್ರಿವೇಣಿಯ ಅಂಕಣ ಬರಹ "ತುಳಸಿವನ" ಅದೇ ಹೆಸರಲ್ಲಿ ಮರುಮುದ್ರಣವನ್ನೂ ನನ್ನ ಹೊಸ ಕವನ ಸಂಕಲನ "ಭಾವಬಿಂಬ"ವನ್ನೂ ಪ್ರಕಟಿಸಲಿದ್ದೇವೆ.

ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ, ಭಾನುವಾರ ಬೆಳಗ್ಗೆ, 10 ಗಂಟೆಗೆ, ಇವೆರಡೂ ಓದುಗರನ್ನು ಎದುರುಗೊಳ್ಳುವಾಗ ವೇದಿಕೆಯಲ್ಲಿ ಡಾ. ಎಚ್ಚೆಸ್ವಿ, ದೊಡ್ಡರಂಗೇಗೌಡ, ಜೋಗಿ ಉಪಸ್ಥಿತರಿರುತ್ತಾರೆ.

ನೀವುಗಳೆಲ್ಲರೂ ಈ ಆಹ್ವಾನವನ್ನು ಮಾನಿಸಿ, ನಮ್ಮ ಜೊತೆಗಿರಲು ಅಲ್ಲಿಗೆ ಬರಬೇಕೆಂದು ಕೋರುತ್ತೇನೆ.

ಇಂತಿ,
ಜ್ಯೋತಿ (ಸುಪ್ತದೀಪ್ತಿ)