tag:blogger.com,1999:blog-6345737459265622584.post5677530956475241101..comments2023-07-13T13:36:52.072+05:30Comments on ಸುಪ್ತದೀಪ್ತಿ <br> Inner Light: ತಾಕಲಾಟಗಳ ಮುಖಾಮುಖಿ: ಸಂಸ್ಕಾರ-ಅವಸ್ಥೆಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger8125tag:blogger.com,1999:blog-6345737459265622584.post-36109060508137929472010-01-14T08:48:50.042+05:302010-01-14T08:48:50.042+05:30ಆನಂದ್, ಧನ್ಯವಾದಗಳು.
ಲೇಖನದಲ್ಲೇ ತಿಳಿಸಿದಂತೆ, ಶ್ರೀ ನಾಗ...ಆನಂದ್, ಧನ್ಯವಾದಗಳು. <br />ಲೇಖನದಲ್ಲೇ ತಿಳಿಸಿದಂತೆ, ಶ್ರೀ ನಾಗಾ ಐತಾಳರು ಸಂಪಾದಿಸಿರುವ "ಅಭಿನವ" ರವಿ ಪ್ರಕಟಿಸಿರುವ "ಅನಂತ ಮುಖದ ಮೂರ್ತಿ" ಗ್ರಂಥಕ್ಕಾಗಿ ಕಳೆದ ಅಕ್ಟೋಬರಿನಲ್ಲಿ ಬರೆದ ಲೇಖನವಿದು. ಪುಸ್ತಕದ ಬಿಡುಗಡೆ ಡಿಸೆಂಬರ್ ಇಪ್ಪತ್ತೊಂದರಂದು ಬೆಂಗಳೂರಲ್ಲಿ ನಡೆದಿದೆ. ನಂತರವೇ ಇದನ್ನು ಬ್ಲಾಗಿನಲ್ಲಿ ಹಾಕಿದ್ದು. <br /><br />ಈ ಬರಹದ ಮಿತಿ ಮತ್ತು ವ್ಯಾಪ್ತಿ ಈ ಎರಡು ಕಾದಂಬರಿಗಳ ನಾಯಕರ ಒಳ ಸಂಘರ್ಷ ಮತ್ತು ತಾಕಲಾಟಗಳಷ್ಟೇ ಆದ್ದರಿಂದ ಆ ಚೌಕಟ್ಟಿನೊಳಗೇ ಬರೆದಿದ್ದೇನೆ. ಹಾಗಾಗಿ ಬೇರೆ ಕೃತಿಗಳನ್ನು ಅಲ್ಲಿ ಉಲ್ಲೇಖಿಸಿಲ್ಲ, ವ್ಯಾಖ್ಯಾನಿಸಿಲ್ಲ. <br /><br />ನೀವು ತಿಳಿಸಿರುವ ಕೊಂಡಿಗಳನ್ನು ಅನುಸರಿಸಿ ಹೋಗಿ ಓದುತ್ತೇನೆ, ಧನ್ಯವಾದಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-7155734497307238532010-01-14T01:18:43.630+05:302010-01-14T01:18:43.630+05:30ಬ್ಲಾಗ್ ಲೋಕದಲ್ಲೇಕೋ ಹಳೆಯ ಪುಸ್ತಕಗಳ ಚರ್ಚೆ ಶುರುವಾದಂತಿದೆ...ಬ್ಲಾಗ್ ಲೋಕದಲ್ಲೇಕೋ ಹಳೆಯ ಪುಸ್ತಕಗಳ ಚರ್ಚೆ ಶುರುವಾದಂತಿದೆ. ಈಗಷ್ಟೇ <a href="http://manasa-hegde.blogspot.com/2010/01/blog-post.html" rel="nofollow">ದಾಟು ಬಗ್ಗೆ ಬರೆದ ಬ್ಲಾಗ್</a> ಓದಿ ಬಂದೆ.<br />ಅನಂತಮೂರ್ತಿಯವರ ಹಳೆಯ ಕಾದಂಬರಿಗಳ ನೆನಪು ಮಾಡಿಕೊಟ್ಟಿದ್ದೀರಿ. ನಾನು ಮೆಚ್ಚಿದ ಕಾದಂಬರಿಗಳಲ್ಲಿ ಇವೂ ಎರಡು. ನನ್ನ ಅಭಿರುಚಿಗಳು ಬದಲಾದವೋ ಏನೋ ಆ ನಂತರ ಬಂದ ದಿವ್ಯ, ಭವ ಎಲ್ಲವೂ ಸಪ್ಪೆ ಎನ್ನಿಸಿಬಿಟ್ಟವು. ಅವರ ಕಾದಂಬರಿಗಳಿಗಿಂತ ಅವರ ಕಥೆಗಳೇ ಇನ್ನೂ ನೆನಪಿನಲ್ಲಿವೆ. ಚಿಕ್ಕಂದಿನಲ್ಲಿ ಓದಿದ 'ಸೂರ್ಯನ ಕುದುರೆ' ಇನ್ನೂ ನೆನಪಿದೆ.<br />ಅವರು ಬರೆದ ಕೆಲವು ಕವಿತೆಗಳನ್ನು ಕೂಡ ಅಲ್ಲಲ್ಲಿ ಓದಿದ್ದೇನೆ. ಅಷ್ಟೇನೂ ಹಿಡಿಸಲಿಲ್ಲ.<br />ನಿಮ್ಮ ವಿಮರ್ಶೆ ಚೆನ್ನಾಗಿದೆ. ಆದರೆ ಅವರ ಘಟಶ್ರಾದ್ಧ ಮುಂತಾದ ಕಥೆಗಳನ್ನೂ ಉಲ್ಲೇಖಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ... <br />ಸಾಧ್ಯವಾದಲ್ಲಿ ಒಮ್ಮೆ <a href="http://sampada.net/blog/d_s_nagabhushana/02/11/2007/6129" rel="nofollow">ಇದನ್ನೂ ನೋಡಿ</a>ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-6345737459265622584.post-78279584051850946392010-01-13T23:23:37.617+05:302010-01-13T23:23:37.617+05:30ಗುರುಮೂರ್ತಿ, ಸುನಾಥ್ ಕಾಕಾ ಮತ್ತು ತೇಜು, ಧನ್ಯವಾದಗಳು.
...ಗುರುಮೂರ್ತಿ, ಸುನಾಥ್ ಕಾಕಾ ಮತ್ತು ತೇಜು, ಧನ್ಯವಾದಗಳು. <br /><br />ಗುರುಮೂರ್ತಿ, ನನ್ನ ಸ್ವಂತ ಅಭಿಪ್ರಾಯಗಳು ನಿಮಗೆ ಸ್ಫೂರ್ತಿಯಾಗಿರುವುದು ನಿಮ್ಮ ಅಭಿರುಚಿ ಉತ್ತಮವಾಗಿರುವುದನ್ನು ತೋರುತ್ತದೆಯಷ್ಟೆ. ಓದಿ, ನಿಮಗೇನನಿಸಿತು, ಹೇಳಿ. <br /><br />ಕಾಕಾ, ನಿಷ್ಪಕ್ಷಪಾತ ಅಭಿಪ್ರಾಯ ಮಂಡನೆ ನನ್ನ ಧ್ಯೇಯವಾಗಿತ್ತು, ನಿಜ. ಅದನ್ನು ಸಾಧಿಸಿದ್ದೇನೆ ಅಂತ ನಿಮ್ಮಿಂದ ಕೇಳಿ ಖುಷಿಯಾಗಿದೆ. ಈ ನಾಯಕರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹೇಳುತ್ತೀರ? <br /><br />ತೇಜು, ಸಂಸ್ಕಾರ ಮತ್ತು ಅವಸ್ಥೆ- ಇವೆರಡೂ ಕಾದಂಬರಿಗಳಲ್ಲಿ ಪೂರ್ವಾಗ್ರಹ ಪೀಡಿತ ಸನ್ನಿವೇಶಗಳು, ವಿವರಣೆಗಳು ಸಾಕಷ್ಟಿವೆ. ಅವನ್ನೆಲ್ಲ ಬರೆಯುತ್ತಾ ಹೋದಲ್ಲಿ ಲೇಖನದ ಮಿತಿ ಮೀರುತ್ತದೆನ್ನುವ ಕಾರಣಕ್ಕಾಗಿ ಇಬ್ಬರು ನಾಯಕರ ಪಾತ್ರಗಳನ್ನೂ ಅವರೊಳಗಿನ ತಾಕಲಾಟಗಳನ್ನೂ ಮುಖ್ಯವಸ್ತುವಾಗಿ ಇಟ್ಟುಕೊಂಡೆ. ಈ ಚೌಕಟ್ಟಿನ ಮಿತಿಯೊಳಗೆ ಬರೆಯುವುದೂ ಒಂದು ಸವಾಲೇ ಆಗಿತ್ತು. ಅದನ್ನು ಸರಿಯಾಗಿ ನಿಭಾಯಿಸಿದ್ದೇನೋ ಇಲ್ಲವೋ ತಿಳಿಯದು. ಅವಸ್ಥೆಯನ್ನು ಕೆಲವರು "ಅದು ಬರೀ ಅವಸ್ಥೆ" ಅಂದಿದ್ದಾರೆ. ಯೋಚನೆ ಮಾಡಿ ಓದಿಗಿಳಿ, ಆಯ್ತಾ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-5287717074747425102010-01-13T22:52:05.966+05:302010-01-13T22:52:05.966+05:30ಅಕ್ಕ,
ಮೊದಲಿಗೆ : ನಿಮ್ಮಂತೇ ನನ್ನಲ್ಲೂ ಮಾಧ್ಯಮದವರ ಪ್ರಭಾ...ಅಕ್ಕ,<br /><br />ಮೊದಲಿಗೆ : ನಿಮ್ಮಂತೇ ನನ್ನಲ್ಲೂ ಮಾಧ್ಯಮದವರ ಪ್ರಭಾವಕ್ಕೋ ಇಲ್ಲಾ ಕೆಲವೊಂದು ಆತ್ಮೀಯರ ಮಾತುಗಳಿಂದ ಅನಂತ ಮೂರ್ತಿಯವರ ಪ್ರತಿ ಒಂದು ಋಣಾತ್ಮಕ ಛವಿ ನನ್ನ ಮನದಲ್ಲೂ ಮೂಡಿತ್ತು. ಆದರೆ ಸಂಸ್ಕಾರ ಹಾಗೂ ಘಟಶ್ರಾದ್ಧ ಪುಸ್ತಕಗಳನ್ನೋದಿದ ಮೇಲೆ ಆ ಛವಿ ಮರೆಯಾಗುವ ಬದಲು ಇನ್ನೂ ಗಾಢವಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ!<br /><br />ಸಂಸ್ಕಾರದಲ್ಲಿ ಪ್ರಾಣೇಶಾಚಾರ್ಯರು ಹೇಗೆ ಅಧೋಗತಿಯ ಆಳವನ್ನು ನೋಡಿ ಮೇಲೇರಲು ಯತ್ನಿಸಿದರು, ಯಾವ ರೀತಿ ಅವರ ಆಂತರ್ಯ ನಿಜವಾಗಿಯೂ ಸಂಸ್ಕಾರವನ್ನು ಹೊಂದಲು ಬಯಸಿತು ಎನ್ನುವುದನ್ನು ವಿವರಿಸಿದೆ ನಿಜ. ಆದರೆ ಜೊತೆಗೇ ಹಲವಾರು ಪಂಗಡಗಳ, ಧಾರ್ಮಿಕ ವಿಧಿವಿಧಾನಗಳ, ಜಾತಿ/ಉಪಜಾತಿಗಳೊಳಗಿನ ಸಂಪ್ರದಾಯ, ಆಹಾರ ವಿಚಾರಗಳನ್ನು ತುಂಬಾ ತುಚ್ಛವಾಗಿ ಲೇವಡಿ ಮಾಡಿದ್ದಾರೆ ಅನಂತಮೂರ್ತಿಯವರು. ಎಲ್ಲವನ್ನೂ, ಎಲ್ಲರನ್ನೂ generalize ಮಾಡಲು ಹೋಗಿ ಎಡವಿದಂತೆ ಅನಿಸಿತು. ಪ್ರಾಣೇಶಾಚಾರ್ಯರ ಪಾತ್ರ ಮಾತ್ರ ಸರಿಯಾಗಿದ್ದು ಉಳಿದುದೆಲ್ಲಾ ಪೂರ್ವಾಗ್ರಹ ಪೀಡಿತದಂತೇ ನನಗೆ ಅನಿಸಿದ್ದು ಸುಳ್ಳಲ್ಲ.<br /><br />ನಿಮ್ಮ ಸುಂದರ ಹಾಗೂ ಮನೋಜ್ಞ ವಿಮರ್ಶೆಗಳನ್ನೋದಿ "ಅವಸ್ಥೆ"ಯನ್ನೂ ಒಮ್ಮೆ ಓದಬೇಕೆಂದೆನಿಸಿದೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6345737459265622584.post-74645732843427798662010-01-13T18:16:54.367+05:302010-01-13T18:16:54.367+05:30ಜ್ಯೋತಿ,
ಉತ್ತಮ ವಿಮರ್ಶೆ. ಅನಂತಮೂರ್ತಿಯವರ ಬಗೆಗಿನ ನಮ್ಮ ಅ...ಜ್ಯೋತಿ,<br />ಉತ್ತಮ ವಿಮರ್ಶೆ. ಅನಂತಮೂರ್ತಿಯವರ ಬಗೆಗಿನ ನಮ್ಮ ಅಭಿಪ್ರಾಯ ಏನೇ ಇರಲಿ, ಅವರ ಸಾಹಿತ್ಯದ ವಿಮರ್ಶೆಯನ್ನು ನಿಷ್ಪಕ್ಷಪಾತವಿಲ್ಲದೆ ಮಾಡಬೇಕು ಎನ್ನುವ ಧೋರಣೆ ಸರಿಯಾಗಿದೆ. ಆ ಗುರಿಯನ್ನು ಸಾಧಿಸಿದ್ದೀರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6345737459265622584.post-60927625570937757532010-01-13T17:13:42.041+05:302010-01-13T17:13:42.041+05:30ತುಂಬಾ ಚೆನ್ನಾಗಿ ಕಾದಂಬರಿಗಳ ಬಗೆಗೆ ತಿಳಿಸಿದ್ದಿರಿ
ನಾನೂ ...ತುಂಬಾ ಚೆನ್ನಾಗಿ ಕಾದಂಬರಿಗಳ ಬಗೆಗೆ ತಿಳಿಸಿದ್ದಿರಿ<br />ನಾನೂ ಇದನ್ನು ಓದಿಲ್ಲ<br />ಓದುವ ಆಸೆ ಮಾಡಿದ್ದಿರಿ<br />ಅಭಿನಂದನೆಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6345737459265622584.post-47069045454162503532010-01-13T15:13:11.588+05:302010-01-13T15:13:11.588+05:30ಧನ್ಯವಾದಗಳು ಸೀತಾರಾಮ್ ಸರ್. ಯು.ಆರ್.ಎ. ಕಥೆಗಳಲ್ಲಿ ಕೆಲವೇ...ಧನ್ಯವಾದಗಳು ಸೀತಾರಾಮ್ ಸರ್. ಯು.ಆರ್.ಎ. ಕಥೆಗಳಲ್ಲಿ ಕೆಲವೇ ಕೆಲವನ್ನು ಮಾತ್ರ ಓದಿದ್ದೇನೆ. ರೂಪಾಂತರ ಓದಿಲ್ಲ, ತಿಳಿಸಿದ್ದಕ್ಕೆ ವಂದನೆಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-4487117905263116332010-01-13T11:09:04.911+05:302010-01-13T11:09:04.911+05:30೧೯೮೫-೮೭ ರ ಸಮಯದಲ್ಲಿ ಓದಿದ ಅನ೦ತಮೂರ್ತಿಯವರ ಎರಡು ಅಪರೂಪದ ...೧೯೮೫-೮೭ ರ ಸಮಯದಲ್ಲಿ ಓದಿದ ಅನ೦ತಮೂರ್ತಿಯವರ ಎರಡು ಅಪರೂಪದ ಕಾದ೦ಬರಿಗಳ ಮೆಲುಕನ್ನು ಮಾಡಿಕೊಟ್ಟಿರಿ. ಅನ೦ತಮೂರ್ತಿಯವರ ಕಥೆಗಳು ಚೆನ್ನಾಗಿರುತ್ತವೆ. ಆಕಾಶ ಮತ್ತು ಬೆಕ್ಕು ಎನ್ನುವ ಅವರ್ ಕಥಾ ಸ೦ಕಲನ ಚೆನ್ನಾಗಿದೆ. ರೂಪಾ೦ತರ ಎ೦ಬ ಕತೆ ತೀವ್ರ ಸ೦ಕೀರ್ಣ ಸ೦ಕೇತಗಳ ಅಪರೂಪದ ಕತೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com